ತಾನು ಮಾಡಿರೋ ತಪ್ಪು, ಯಡವಟ್ಟು ಕಣ್ಣಿಗೆ ರಾಚುತ್ತಿದ್ರೂ ಬಿಬಿಎಂಪಿ ಮಾತ್ರ ಮೈಗೆ ಎಣ್ಣೆ ಹಚ್ಚಿಕೊಂಡಂತೆ ವರ್ತಿಸ್ತಿದೆ. ಮೋದಿ ಸ್ವಾಗತಕ್ಕೆ ಹಾಕಿದ ರಸ್ತೆ ಒಂದೇ ದಿನಕ್ಕೆ ಹಾಳಾಗಿದ್ದಕ್ಕೆ ನಾವು ಕಾರಣವಲ್ಲ ಅಂತ ಜಲಮಂಡಳಿಯ ಮೇಲೆ ಗೂಬೆ ಕೂರಿಸಿದೆ. ಕಳಪೆ ಕಾಮಗಾರಿ ಹೊಣೆ ಹೊತ್ತಿಕೊಳ್ಳಲು ಒಬ್ಬರೂ ತಯಾರಿಲ್ಲ. ಇಡೀ ಪ್ರಕರಣವನ್ನೇ ಉಲ್ಟಾ ಮಾಡಲು ಬಿಬಿಎಂಪಿ ಹೊರಟಿದೆ. ಹಾಳಾಗಿರೋ ರಸ್ತೆ ಪ್ರಧಾನಿ ಮೋದಿ ಓಡಾಡಿದ್ದಲ್ಲ. ಮೋದಿ ಓಡಾಡಿದ ಪಕ್ಕದ ರಸ್ತೆ.. ಹಾಳಾದ ರಸ್ತೆಯಲ್ಲಿ ಸಿವೇಜ್ ನೀರು ಹೋಗುತ್ತಿತ್ತು. ಮಳೆ ನೀರು ನಿಲ್ಲುತ್ತಿತ್ತು. 2021 ರಲ್ಲೇ ಡಾಂಬರೀಕರಣ ಆಗಿದ್ರೂ ರಸ್ತೆ ಕುಸಿದಿತ್ತು. ಮೋದಿ ಬರ್ತಾರೆ ಅಂತ ಈ ರಸ್ತೆಗೂ ಟಾರ್ ಹಾಕಿದ್ವಿ. ಮೋದಿ ಬರುವ ರಸ್ತೆಯನ್ನು ಅಭಿವೃದ್ಧಿಪಡಿಸುವಾಗ ಅದನ್ನೂ ಅಭಿವೃದ್ಧಿ ಮಾಡಿದ್ವಿ. ಈ ಬಗ್ಗೆ ಪ್ರಧಾನಿ ಕಾರ್ಯಾಲಯಕ್ಕೂ ವರದಿ ನೀಡಿದ್ದೇವೆ ಅಂತ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಈಗ ಹೊಸ ಕತೆ ಹೇಳ್ತಿದ್ದಾರೆ.
#publictv #bbmp